Sunday, November 2, 2008

ಪ್ರಿಯೇ ನಿನ್ನ ಸೌಂಧ­ರ್ಯ­ವನ್ನು...

ಯಾಕೋ ಏನೋ ಇಂಗ್ಲಿಷ್‌ ಥೀಯ­ಟರ್‌ ಪದ್ಧತಿ ಬಂದ ಮೇಲೆ ನಮ್ಮ ಹಳ್ಳಿ ನಾಟ­ಕಕ್ಕೆ ಕುತ್ತು ಬಂದಿ­ರಿ­ವು­ದೆಂತು ಸತ್ಯ. ಉತ್ತರ ಕರ್ನಾ­ಟಕ, ಮತ್ತು ಬೆಂಗ­ಳೂರು, ಚಿರ್ತ­ದುರ್ಗ ಭಾಗ­ದಲ್ಲಿ ಇನ್ನೂ ಪರದೆ ನಾಟ­ಕದ ಸಂಸ್ಕ­­ತಿ­ಯಿ­ರು­ವುದು ಸಂತ­ಸದ ವಿಚಾರ. ಪರದೆ ನಾಟ­ಕ­ಗ­ಳೆಂ­ದರೆ ಚಂದೋಡಿ ಲೀಲಾ ಅವರ ಕಂಪ­ನಿ­ಯಲ್ಲ. ಹಳ್ಳಿ­ಯಲ್ಲಿ ಕಡಿಮೆ ಓದು ಬರಹ ಕಲಿತು, ಕೃಷಿ ಕೆಲ­ಸ­ದಲ್ಲಿ ನಿರ­ತ­ರಾ­ಗಿದ್ದು ಬೇಸಿ­ಗೆಯ ಸಮಯ ಇರುವ ಅವ­ಧಿ­ಯಲ್ಲಿ ಸ್ವಲ್ಪ ಓದಿ, ಆರೆಂಟು ನಾಟ­ಕ­ಗ­ಳನ್ನು ಆಡಿ­ಸಿದ ಅನು­ಭ­ವ­ವಿ­ರುವ ಬುದ್ಧಿ­ವಂ­ತ­ನೊಬ್ಬ ನಾಟ­ಕದ ನಿರ್ದೇ­ಶ­ಕ­ನಾ­ಗು­ತ್ತಾನೆ. ಇಂತಹ ನಾಟ­ಕದ ಗಮ್ಮತ್ತೆ ಬೇರೆ.
ಅದರ ಕೆಲವು ಜಲಕ್‌ ಇಲ್ಲಿದೆ.
ಟ್ರೈಲೆಲ್ಲಾ ಆಗಿ ನಾಟಕ ಪ್ರಾರಂ­ಭ­ವಾ­ಗಿದೆ. ಖಳ ನಾಯ­ಕನ ಪ್ರವೇಶ.ರಂ­ಗ­ದಲ್ಲಿ ಯಾವ ಲೈಟು ಇಲ್ಲಾ. ವಿಕಟ ನಗೆ­ಯನ್ನು ಆಡಿ`ಹ್ಹಾ ಹ್ಹಾ' ಎಂದು ಸಿಗ­ರೇ­ಟನ್ನು ಜೇಜಿಂದ ಸೋಗೆದು ತುಟಿಗೆ ಅಂಟಿಸಿ ಚಕ­ಮು­ಕಿ­ಯನ್ನು ಹಚ್ಚಲು ಪ್ರಯತ್ನ ಮಾಡು­ತ್ತಾನೆ ಆಗು­ವು­ದಿಲ್ಲ ಯಾಕೆಂ­ದರೆ ಅದ­ರ­ಲ್ಲಿ­ರುವ ಗ್ಯಾಸ್‌ ಖಾಲಿ­ಯಾ­ಗಿದೆ. ರಂಗ­ದಲ್ಲಿ ಲೈಟ್‌ ಇಲ್ಲದ ಕಾರಣ ಪ್ರೇಕ್ಷ­ಕ­ನೋ­ರ್ವ­ನಿಗೆ ಖಳ­ನಾ­ಯಕ ಯಾರೆಂದು ತಿಳಿ­ಯುವ ಕುತೂ­ಹಲ. ತನ್ನ­ಹತ್ರ ಇರುವ ಟಾರ್ಚ್‌ನ್ನು ನೇರ­ವಾಗಿ ಅವ­ನಿಗೆ ಬಿಟ್ಟಿ­ದ್ದಾನೆ. ಖಳ­ನಾ­ಯಕ ಯಾರೆಂದು ಗೊತ್ತಾ­ಯಿತು. ತಕ್ಷ­ಣವೇ ತಡ­ಮಾ­ಡದೇ.`ಏ ಗೋಪಾ­ಲ­ಹುಡ್ಗ ಪ್ಯಾಂಟಿನ ಜೀಪ್‌ ಹಾಕ್ಯುಂಡು ಸಾಯಲೇ' ಎಂದು­ಕೂ­ಗಿದ. ಖಳ­ನಾ­ಯ­ಕನ ಗಾಂಭೀ­ರ್ಯ­ವನ್ನೆ ನಾಶ­ವಾಗಿ ಹೋಯಿತು.
ಎರ­ಡನೇ ನಾಟಕ, ಪೌರಾ­ಣಿಕ ಕಥಾ­ನಕ. ಭೀಷ್ಮ­ಪರ್ವ. ಭೀಷ್ಮ ಕುಳಿ­ತಿ­ದ್ದಾನೆ. ಹತ್ತಿರ ಬಂದ ಅರ್ಜುನ ಮಾತು ಮಾತಿಗೆ ` ಹೇತಾತಾ...ಹೇ­ತಾತಾ' ಎಂದು ಸಂಭೋ­ದಿ­ಸು­ತ್ತಾನೆ. ಆಗ ಭೀಷ್ಮನ ಪಾತ್ರ­ದಾರಿ ತಡ­ಪಡ ಮಾಡದೇ` ಬೋಸುಡಿ ಮಗನೇ ಎಷ್ಟ ಸರ್ತಿ ಅನ್ಬಕು. ಹೇತಾತಾ ಹೇತಾತಾ ಅನ್ಬಡ. ಜನ ನಂಗೆ ಮೂಲ­ವ್ಯಾದಿ ಅಂತ ತಿಳ್ಕ­ಬು­ಟಾರು' ಎಂದ.
ಮತ್ತೊಂದು ಪೌರಾ­ಣಿಕ ನಾಟಕ ನಾರ­ದರ ಆಗ­ಮನ ವಾಗು­ತ್ತದೆ. ಎದು­ರಿನ ಪಾತ್ರ­ದಾರಿ ಏನು ಮಾತಾ­ಡ­ಬೇ­ಕೆಂದು ತಿಳಿ­ಯದೆ `ನಾ­ರ­ದರೇ ನಿಮ್ಮ ಹೆಸ­ರೇನು?' ಎಂದು ಕೇಳಿದ ಅದಕ್ಕೆ ನಾರ­ದರು`ವಸ್ತ ನನ್ನ ಹೆಸರು ನಾರದ ಮುನಿ' ಅನ್ನೋದೆ.
ಇದೊಂದು ಸಾಮಾ­ಜಿಕ ನಾಟಕ` ತಾಳಿ ಕಟ್ಟಿ­ದರು ಗಂಡ­ನಲ್ಲ' ಅರ್ಥಾತ್‌ `ಕಾಲು ಕೆದ­ರಿದ ಹುಲಿ' ನಾಟ­ಕದ ದೃಶ್ಯ ಅಂದು­ಕೊ­ಳ್ಳ­ಬ­ಹುದು. ನಾಯಕ ತುಂಬ ಭಾವು­ಕ­ನಾ­ಗಿ­ದ್ದಾನೆ ` ಪ್ರಿಯೆ ಒಡ­ಹು­ಟ್ಟಿದ ಗಂಡ­ನಿಗೆ ಇಸ ಇಕ್ಕ­ದೆಯಾ?'
ಖಳ­ನಾ­ಯಕ ಹುಡು­ಗಿ­ಯೊ­ಬ್ಬ­ಳನ್ನು ನೋಡಿ` ಹೇ ಬಾಲೆ, ಎಂದು ನೀ ಕಾಲೇ­ಜಿಗೆ ಕಣ್ಣಿ­ಟ್ಟೇಯೋ ಅಂದೆ ನಿನ್ನ ಮೇಲೆ ಕಾಲಿಟ್ಟೆ' ಅದು`ಎಂದು ಕಾಲೇ­ಜಿಗೆ ಕಾಲಿ­ಟ್ಟೇಯೋ ಅಂದೆ ನಿನ್ನ ಮೇಲೆ ಕಣ್ಣಿಟ್ಟೆ 'ಎನ್ನ ಬೇಕಾ­ಗಿತ್ತು . ಮತ್ತೊಂದು ದೃಶ್ಯ­ದಲ್ಲಿ ` ಪ್ರಿಯೇ ನಾನು ನಿನ್ನ ಸೌಂಧ­ರ್ಯ­ವನ್ನು ಪ್ರಾಕಿ­ನೊ­ಳಗೆ ಕಂಡೆನು' ಅದು `ಪ್ರಯೆ ನಿನ್ನ­ಸೌಂ­ಧ­ರ್ಯ­ವನ್ನು ಪಾರ್ಕಿ­ನೊ­ಳಗೆ ಕಂಡೆನು' ಎನ್ನ ಬೇಕಿತ್ತು.
ಯಾವುದೋ ಓಡಿ ಹೋಗುವ ಸನ್ನಿ­ವೇಶ. ಆಗ ಬರುವ ಭಾವ­ನಾ­ತ್ಮಕ ಡೈಲಾಗ್‌` ಶಂಕು­ತಲಾ( ಶಕುಂ­ತಲಾ) ನೀನು ಗರ್ಭ­ಣವೇ. ಇನ್ನು ನಾವು ತಡ ಮಾಡ­ಬಾ­ರದು. ನಿನ್ನ ಬಟ್ಟೆ­ಬ­ರೆ­ಯನ್ನು ಕುಟೆ­ಕ್ಷಿ­ನಲ್ಲಿ (ಸೂ­ಟ್‌­ಕೇಸ್‌)ನಲ್ಲಿ ತುಂಬಿ­ಬಿಡು. ನಾಳೆ ಮುಂಜಾಲೆ ನಾನು ಹೋರಟು ಹೋಗಾಣ.
ಇಂತಹ ಸಾವಿ­ರಾರು ಅಪ­ಭ್ರಂ­ಶ­ಗಳು ಹಳ್ಳಿ ನಾಟ­ಕ­ದಲ್ಲಿ ಸಿಗು­ತ್ತದೆ.
ಕೊನೆ­ಯಲ್ಲಿ ನಗ­ರ­ದ­ಲ್ಲಿ­ರು­ವ­ವರು ಊರಿಗೆ ಹೋಗಿ. ಮಾರ್ಚ್‌- ಏಪ್ರಿಲ್‌ ಟೈಮ್‌­ನಲ್ಲೆ ಹೋಗಿ. ಹತ್ತಿ­ರ­ದ­ಲ್ಲೆ­ಲ್ಲಾ­ದರು ನಾಟ­ಕ­ವಾ­ದರೆ ನೋಡಲು ಮರೆ­ಯ­ಬೇಡಿ. ಮರೆತು ನಗೆ ಅಮೃ­ತ­ವನ್ನು ಕಳೆ­ದು­ಕೊ­ಳ್ಳ­ಬೇಡಿ.

4 comments:

Unknown said...

HA HA HA very good. Nice Article. NOw i also want to see of this kind.

Shankar Prasad ಶಂಕರ ಪ್ರಸಾದ said...
This comment has been removed by the author.
Shankar Prasad ಶಂಕರ ಪ್ರಸಾದ said...

ಯಪ್ಪಾ...ನಕ್ಕು ನಕ್ಕೂ ಸಾಕಾಯ್ತು.
ನಾನು ಇವಾಗ ಇರೋದು ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ.
ಟೈಮ್ ಇದೆ ಅಂತ ನಿಮ್ಮ ಬ್ಲಾಗ್ ಓದುತ್ತಾ ಇದ್ದೆ. ಈ ಬರಹ ನೋಡಿ ನಗು ತಡೆಯಲಾಗಲಿಲ್ಲ. ಎಷ್ಟು ಜೋರಾಗಿ ನಕ್ಕೆನೆಂದರೆ, ಅಕ್ಕ ಪಕ್ಕ ಇದ್ದ ಜರ್ಮನ್ ಸಹೋದ್ಯೋಗಿಗಳೆಲ್ಲಾ "ಈ ನನ್ ಮಗಂಗೆ ಏನಾಯ್ತಪ್ಪ" ಅಂತಾ ನೋಡ್ತಾ ಇದ್ರೂ.ಇನ್ನೊಬ್ಲಂತೂ,ಕಣ್ಣೀರು ಒರುಸ್ಕೊಳೋದಕ್ಕೆ ಟಿಶ್ಯೂ ತಂದು ಕೊಟ್ಳು. ಬಹಳ ದಿನ ಆಗಿತ್ತು ಈ ರೀತಿ ನಕ್ಕಿ.
ಮುಂದುವರಿಸಿ ಹೀಗೆಯೇ.

ಕಟ್ಟೆ ಶಂಕ್ರ
http://somari-katte.blogspot.com

thandacool said...

baredakke sartakavayitu. thanks. nanna battalikeyalliruva jokegalannu blog mulaka prayogisuve.

FEEDJIT Live Traffic Feed