Wednesday, January 7, 2009

ಚಂದ್ರ ದಾರಿಯ ಕಥನ


ಲೇಖ­ಕರು: ಟಿ. ಆರ್‌. ಶಿವ­ಪ್ರ­ಸಾದ್‌
ಬೆಲೆ: 120/-
ಪ್ರಥಮ ಮುದ್ರಣ: 2008
ಪ್ರಕಾ­ಶ­ಕರು: ಚಿಂತ­ನ­ಗಂಗಾ ಪ್ರಕಾ­ಶನ
ಲಲಿತ ನಿವಾಸ, ನಂ. 2036/3,
ಮಾಗ­ನೂರು ಬಡಾ­ವಣೆ, ವಿದ್ಯಾ­ನ­ಗರ, ದಾವ­ಣ­ಗೆರೆ


ಕೇರಳ ಸಮುದ್ರ ಅಂಚಿ­ನ­ಲ್ಲ­ರುವ ಅಗದಿ ಪುಟ್ಟ ಗ್ರಾಮ ತುಂಬಾ. ಇಲ್ಲಿ­ರು­ವುದು ಮೀನು­ಗಾ­ರರ ಗುಡಿ­ಸಲು. ಅಲ್ಲೊಂದು ಚರ್ಚ್‌. ರಸ್ತೆ ಸಂಪ­ರ್ಕ­ವಿಲ್ಲ. ಯಾವುದೇ ಮೂಲ ಸೌಕ­ರ್ಯವು ಇಲ್ಲ ಇಂತಹ ಕಡೆ ನಮ್ಮ­ದೇ­ಶದ ಹೆಮ್ಮೆಯ ಬಾಹ್ಯಾ­ಕಾಶ ಸಂಸ್ಥೆ ಇಸ್ರೊ ಮೊದಲ ಹೆಜ್ಜೆ­ಯನ್ನು ಇಲ್ಲಿಂ­ದಲೆ ಪ್ರಾರಂ­ಭಿ­ಸಿತು.
ಭಾರ­ತೀಯ ಬಾಹ್ಯಾ­ಕಾಶ ವಿಜ್ಞಾ­ನದ ಆವಿ­ಷ್ಕಾ­ರದ ಎಳೆ ಎಳೆ­ಯನ್ನು ಸವಿ­ವ­ರ­ವಾಗಿ ತಿಳಿ­ಸುವ ಅಪ­ರೂ­ಪದ ಪುಸ್ತಕ `ಚಂ­ದ್ರ­ಯಾನ'.
ಟಿವಿ 9 ಸುದ್ದಿ ವಾಹಿ­ನಿ­ಯಲ್ಲಿ ದೆಹಲಿ ವರ­ದಿ­ಗಾ­ರ­ರಾಗಿ ಕಾರ್ಯ­ನಿ­ರ್ವ­ಹಿ­ಸು­ತ್ತಿ­ರುವ ಟಿ.ಆರ್‌. ಶಿವ­ಪ್ರ­ಸಾದ್‌ ಸುಂದ­ರ­ವಾಗಿ ಬರೆ­ದಿ­ರುವ ಪುಸ್ತ­ಕ­ವಿದು. ಈ ಹೊತ್ತಿ­ಗೆ­ಯಲ್ಲಿ 5 ಹಂತ­ಗ­ಳಿವೆ. ಮೊದ­ಲನೆ ಹಂತ, ಸಾಧ­ನೆಯ ಹಾದಿ­ಯಲ್ಲಿ. ಇದ­ರಲ್ಲಿ ಮೊದಲ ಹೆಜ್ಜೆ, ತುಂಬಾ ತೀರ­ದಲ್ಲಿ, ಅಮೆ­ರಿಕಾ- ರಷ್ಯಾ ನಡುವೆ ಶೀತಲ ಸಮರ, ಇತಿ­ಹಾಸ ನಿರ್ಮಿ­ಸಿದ ಇಸ್ರೊ ಎನ್ನುವ ಶೀರ್ಷಿಕೆ ಅಡಿ­ಯಲ್ಲಿ ಲೇಖ­ನ­ಗಳು ಇವೆ.
ಎರ­ಡನೇ ಹಂತ ಎಂದೂ ಮುಗಿ­ಯದ ಅನಂತ ಯಾನ. ಇದ­ರಲ್ಲಿ ದೇಶ-ದೇ­ಶ­ಗ­ಳನ್ನು ಬೆಸೆವ ಚಂದ್ರ­ಯಾನ, ಚಂದ್ರ­ಯಾ­ನದ ಪ್ರಯೋಗ ಹಾಗೂ ಉದ್ದೇಶ, ಬ್ಯಾಲಾಳು ಗ್ರಾಮಕ್ಕೆ ಬಂದ ಭಾಗ್ಯ, ಶ್ರೀರಂ­ಗ­ಪ­ಟ್ಟ­ಣ­ದಿಂದ ಚಂದಿ­ರ­ನ­ವ­ರೆಗೆ, ಭಾರ­ತ­ದೆ­ಡೆಗೆ ಅಮೆ­ರಿಕಾ ಅನು­ಮಾನ, ಝಂಡಾ ಉಂಚಾ ರಹೇ ಹಮಾರಾ, ಚಂದ್ರ­ಯಾನ- ಭಾಗ 2 ಎನ್ನುವ ಲೇಖ­ನ­ಗ­ಳಿವೆ. ಮೂರನೇ ಹಂತ­ದಲ್ಲಿ ನಿಧಿ- ನೀರು- ನೆರಳು. ಇದ­ರಲ್ಲಿ ಚಂದ್ರನ ಜನ್ಮ ರಹಸ್ಯ, ಚಂದ್ರ­ನಲ್ಲಿ ಅಂತಾ­ದೇ­ನೈತಿ ?, ಚಂದ್ರನ ಮೇಲೆ ಹೀಲಿಯಂ ಎಂಬ ನಿಧಿ !, ಚಂದ್ರ­ನಲ್ಲಿ ನೀರಿ­ದೆಯೇ ?, ಚಂದ್ರನ ಮೇಲೊಂದು ಮನೆಯ ಮಾಡಿ, ಚಂದ್ರ, ಗ್ರಹ, ನಕ್ಷ­ತ್ರ­ಗಳು ಯಾರ ಆಸ್ತಿ ? ಎನ್ನುವ ಮಾಹಿ­ತಿ­ಗ­ಳಿವೆ. ನಾಲ್ಕನೇ ಹಂತ ಬಾಹ್ಯಾ­ಕಾ­ಶ­ವೆಂಬ ನಿತ್ಯ ಕೌತುಕ. ಇಲ್ಲಿ ಹೀಗೊಂದು ಚಂದ್ರನ ಪ್ರೇಮ ಪ್ರಸಂಗ, ಚಂದಿರ ತಂದಾ ಹುಣ್ಣಿಮೆ ರಾತ್ರಿ, ಅಂತ­ರಿ­ಕ್ಷ­ದಲ್ಲಿ ಅಪಾ­ಯ­ಕಾರಿ ಕಸ, ಬಾಹ್ಯಾ­ಕಾ­ಶ­ವೆಂಬ ಆಕ್ಸಿ­ಡೆಂಟ್‌ ಜೋನ್‌ ಎಂಬ ಅಧ್ಯಾ­ಗಳು ಬರು­ತ್ತವೆ. ಐದನೇ ಹಂತ ಎಲ್ಲಗೋ ಪಯಣ, ಯಾವುದೋ ದಾರಿ!. ದಿ ಗ್ರೇಟ್‌ ಮೂನ್‌ ಹೋಕ್ಸ್‌ಘ- 1835, ಚಂದ್ರನ ಮೇಲೆ ಮಾನ­ವನ ಮಹಾ­ಮೋಸ !?, ಮನು­ಕುಲ ಮರೆ­ಯ­ಲಾ­ಗದ ಪ್ರಾಣಿ, ಕೀಟ­ಗಳು, ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬ ಲೆಖ­ನ­ಗಳ ಸಂಗ್ರ­ಹ­ಗಳು ಬರು­ತ್ತವೆ.
ಈ ಪುಸ್ತ­ಕ­ದ­ಲ್ಲಿ­ರುವ ಪ್ರತಿ­ಯೊಂದು ಹಂತವು ಅತ್ಯಂತ ಕೌತು­ಕ­ತೆ­ಯಿಂದ ಲೇಖ­ನ­ಗ­ಳನ್ನು ಓದಿ­ಕೊಂಡು ಹೋಗು­ತ್ತದೆ. ಶಿವ­ಪ್ರ­ಸಾದ್‌ ಅವರು ತಮ್ಮ ಲೇಖ­ನದ ಜೊತೆಗೆ ಪತ್ರ­ಕ­ರ್ತ­ರಾದ ವಿನಾ­ಯಕ ಭಟ್‌, ವೀರಣ್ಣ ಕಮ್ಮಾರ, ರಜನಿ ಎಂ. ಜಿ, ಚೀ.ಜ. ರಾಜೀವ್‌, ವಿಭವ್‌ ಬರೆದ ಮಾಹಿ­ತಿ­ಪೂರ್ಣ ಬರೆ­ಹ­ಗ­ಳನ್ನು ಇಟ್ಟಿ­ದ್ದಾರೆ. ಮೊದಲ ಹೆಜ್ಜೆ­ಯ­ಲ್ಲಿಯೇ ಲೇಖ­ನ­ಗಳು ಕುತೂ­ಹ­ಲ­ವನ್ನು ಕೆರ­ಳಿ­ಸುತ್ತಾ ಸಾಗು­ತ್ತದೆ. ನಮ್ಮ ದೇಶದ ವಿಜ್ಞಾ­ನಿ­ಗಳು ದನದ ಕೊಟ್ಟಿ­ಗೆ­ಯನ್ನೇ ಪ್ರಯೋ­ಗಾ­ಲ­ವಾಗಿ ಮಾಡಿ­ಕೊಂಡು ಯಶ­ಸ್ವಿ­ಯಾದ ಕತೆ­ಯನ್ನು ಓದುತ್ತ ಹೋದಂತೆ ನಮಗೆ ನಾವೇ ಹೆಮ್ಮೆ ಪಡುತ್ತಾ ಹೋಗು­ತ್ತೇವೆ. ಪ್ರತಿ­ಯೊಂದು ಲೇಖ­ನದ ಜೊತೆಗೆ ಆಸ­ಕ್ತಿ­ದಾ­ಯಕ ವಿಷ­ಯ­ಗ­ಳನ್ನು ಟಿಪ್ಸ್‌ ರೀತಿ ನೀಡುತ್ತಾ ಹೋಗಿ­ರು­ವುದು ಈ ಹೊತ್ತಿ­ಗೆಯ ವಿಶೇಷ.
ಬಾಹ್ಯಾ­ಕಾಶ ಸಂಶೋ­ಧ­ನೆ­ಗ­ಳಲ್ಲಿ ಬಲಿಷ್ಠ ರಾಷ್ಟ್ರ­ಗಳ ತೀವ್ರ ಪೈಪೋ­ಟಿ­ಯನ್ನು ಎದು­ರಿ­ಸುತ್ತಾ ನಮ್ಮ ಸಾಧ­ನೆ­ಯನ್ನು ಮಾಡುತ್ತಾ ಹೋದ ಭಾರ­ತೀಯ ವಿಜ್ಞಾ­ನಿ­ಗಳ ಸಾಧ­ನೆಯ ಹಾದಿ­ಯನ್ನು ಈ ಪುಸ್ತಕ ಸ್ಪಷ್ಟ­ಪ­ಡಿ­ಸು­ತ್ತದೆ. ಶಿವ­ಪ್ರ­ಸಾದ್‌ ಅವರು `ಚಂ­ದ್ರ­ಯಾನ'ದ ಮೂಲಕ ಬಾಹ್ಯಾ­ಕಾಶ ತಂತ್ರ­ಜ್ಞಾ­ನದ ವಿಭಿನ್ನ ಮಜ­ಲು­ಗ­ಳನ್ನು ಸ್ಪಷ್ಟ­ವಾಗಿ ತೋರಿ­ಸು­ವಲ್ಲಿ ಯಶ­ಸ್ವಿ­ಯಾ­ಗಿ­ದ್ದಾರೆ.

ನಾಗರಾಜ ಮತ್ತಿಗಾರ

(ಉದಯಾವಾಣಿ ಪುಸ್ತಕಸಂಪದದಲ್ಲಿ ಪ್ರಕಟಗೊಂಡ ಲೇಖನ)

FEEDJIT Live Traffic Feed