Monday, July 4, 2011

ಎಂಡೋ ನಿಷೇಧ: ಆದೇಶ, ಅಧ್ಯಯನ, ಆಪೋಶನ

<span title="Click to correct" class="transl_class" id="1">ಎಂಡೋ</span> <span title="Click to correct" class="transl_class" id="2">ನಿಷೇಧ</span>

ಕರ್ನಾಟಕದ ಎಂಡೋ ಪೀಡಿತ ಪ್ರದೇಶ ಕೊಕ್ಕಡದ ಮಹಿಳೆ ಸುಂದರಿ ಎಂಬುವವಳು ಇತ್ತೀಚೆಗೆ ಕ್ಯಾನ್ಸರ್್ನಿಂದ ಮೃತ ಪಟ್ಟರು. ಇವರ ಸಾವಿಗೆ ಎಂಡೋಸಲ್ಫಾನ್ ಸಿಂಪರಣೆಯ ದೂರಗಾಮಿ ಪರಿಣಾಮವೇ ಕಾರಣ ಎನ್ನುವುದು ಊರಿನವರ ಅಂಬೋಣ. ಅಸಹಜ ರೀತಿಯಲ್ಲಿ ಇಲ್ಲಿ ಮೃತಪಟ್ಟವರಲ್ಲಿ ಇವರೇ ಮೊದಲಿಗರಲ್ಲ. ಇದಕ್ಕೂ ಮುನ್ನ ಬಹಳಷ್ಟು ಜನರು ಇಹಲೋಕ ಯಾತ್ರೆ ಮಾಡಿದ್ದಾರೆ. ಕ್ಯಾನ್ಸರ್, ದೀರ್ಘಕಾಲಿಕ ಅಂಗವೈಕಲ್ಯ ಹೊಂದಿದವರು, ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರೂ ಇವರಲ್ಲಿ ಸೇರಿದ್ದಾರೆ. ನಿರಂತರ 18 ವರ್ಷಗಳ ಕಾಲ ಈ ಭಾಗದಲ್ಲಿ ಎಂಡೋಸಲ್ಫಾನನ್ನು ಸಿಂಪರಣೆ ಮಾಡಿರುವುದೇ ಇದಕ್ಕೆಲ್ಲ ಕಾರಣ .

ಆದರೂ ನಮ್ಮ ರಾಜ್ಯದ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳಿಗೆ ಎಂಡೋ ಕೀಟನಾಶಕವೇ ಕೃಷಿಯಲ್ಲಿನ ಸರ್ವ ರೋಗಕ್ಕೆ ಮದ್ದು. ಜೂನ್ ಮೊದಲವಾರ ದೆಹಲಿಯಲ್ಲಿ ನಡೆದ ಸಭೆಯ ವಿದ್ಯಮಾನ ಇದಕ್ಕೆ ಪುಷ್ಠಿ ನೀಡುತ್ತದೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆ"ಎಂಡೋಸಲ್ಫಾನ್್ಗೆ ಬದಲಿ ವ್ಯವಸ್ಥೆ ಏನು?' ಎಂಬ ವಿಚಾರವಾಗಿ ಚರ್ಚಿಸಲು ಎಲ್ಲಾ ರಾಜ್ಯದ ಕೃಷಿ ಇಲಾಖೆ ಮುಖ್ಯಸ್ಥರನ್ನು ಆಹ್ವಾನಿಸಿತ್ತು. ಕರ್ನಾಟಕದಿಂದ ಭಾಗವಹಿಸಿದ್ದ ಇಲಾಖೆಯ ವ್ಯಕ್ತಿ" ನಮಗೆ ಎಂಡೋಸಲ್ಫಾನ್ ಬೇಕು' ಎಂಬ ಸಲಹೆ ನೀಡಿದರು. ವಿಪರ್ಯಾಸ ಅಂದರೆ ಇದೇ ಅಲ್ಲವೇ."ಬಹಳ ಆಸ್ಥೆ'ಯಿಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎಂಡೋಗೆ ನಿಷೇಧ ಹೇರಿದ್ದಾರೆ. ಅಂಥದರಲ್ಲಿ ಸರ್ಕಾರಕ್ಕೆ ಬೇಡವಾದದ್ದು ಇಲಾಖೆಗೆ ಬೇಕಾಗಿದೆ.

ಅದೇ ಸಭೆಯಲ್ಲಿ ಎಲ್ಲಾ ರಾಜ್ಯದವರು ಎಂಡೋ ಪರ ಮಾತಾಡಿದರೆ ಕೇರಳ ಮಾತ್ರ ವಿರೋಧಿಸಿತು. ಕೇರಳದಷ್ಟೇ ಸಮಸ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲೂ ಇದೆ. ಈ ಎಂಡೋ ಪೀಡಿತ ಪ್ರದೇಶಕ್ಕೆ ಖಂಡಿತ ದೆಹಲಿಯಲ್ಲಿ ಭಾಗವಹಿಸಿದ ಇಲಾಖೆ ಪ್ರತಿನಿಧಿ ಹೋಗಿರಲಿಕ್ಕಿಲ್ಲ. ಆಕಸ್ಮಾತ್ ಹೋಗಿದ್ದರೆ"ನಮಗೆ ಎಂಡೋ ಬೇಕು' ಎನ್ನುತ್ತಿರಲಿಲ್ಲ.

ಅಲ್ಲದೇ, ಕರ್ನಾಟಕದಲ್ಲಿ ಮಾರ್ಚ್್ನಲ್ಲೇ ಎಂಡೋಗೆ ನಿಷೇಧ ಹೇರಿದ್ದರೂ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವ ಇಲಾಖಾ ಅಧಿಕಾರಿ ಇಲ್ಲಿನ ನಿಲವನ್ನು ಮರೆತರೇ? ಈ ಸರ್ಕಾರ ಇರುವುದು ಐದೇ ವರ್ಷ, ಇವರೇನು ಮಾಡಿಯಾರು ಎಂದು ನಿರ್ಲಕ್ಷ್ಯ ಮಾಡಿದರೇ? ಅಥವಾ ಕಂಪನಿ ಜೊತೆ ಕೈ ಜೋಡಿಸಿದರೇ? ಕ್ಯಾಬಿನೆಟ್್ನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇಲ್ಲವೇ?

ಇನ್ನು ಸರ್ಕಾರ ಎಂಡೋ ವಿಷವನ್ನು ಎರಡು ತಿಂಗಳ ಮಟ್ಟಿಗೆ ಬ್ಯಾನ್ ಮಾಡಿ, ನಂತರ ಮತ್ತೆರಡು ತಿಂಗಳು ಮುಂದುವರಿಸಿತು. ಈ ಬ್ಯಾನ್ ಎನ್ನುವುದು ಕಡತದಲ್ಲೇ ಇರುವಂತೆ ಕಾಣುತ್ತದೆ. ಯಾಕೆಂದರೆ ಯಾದಗಿರಿ ಜಿಲ್ಲೆಯಲ್ಲಿ ಎಂಡೋ ಬ್ಯಾನ್ ಪ್ರಭಾವ ಕಾಣಲಿಲ್ಲ. ಆಂಧ್ರದಿಂದ ಎಂಡೋ ಕೀಟನಾಶಕವನ್ನು ತಂದು ಉಪಯೋಗಿಸುತ್ತಿರುವುದು ಪತ್ತೆಯಾಯಿತು. ಮಾಧ್ಯಮದಲ್ಲಿ ಇದರ ಕುರಿತು ವರದಿಯೂ ಬಂತು. ಆದರೆ ಪರಿಣಾಮ ಮಾತ್ರ ಶೂನ್ಯ. ಯಾವ ಕೀಟನಾಶಕ ಅಂಗಡಿಯಿಂದಲೂ ಎಂಡೋವನ್ನು ಸರ್ಕಾರ ಹಿಂಪಡೆದ ದಾಖಲೆಗಳಿಲ್ಲ.

ಅಂದ ಹಾಗೆ, ಸುಪ್ರೀಂಕೋರ್ಟ್ ಎಂಡೋ ನಿಷೇಧ ಸಮರ್ಪಕವಾಗಿ ಹೇರುವಂತೆ ಕೇಂದ್ರ ಕೃಷಿ ಇಲಾಖೆಗೆ ಆದೇಶಿಸಿದೆ. ಅದರಂತೆ ಇಲಾಖೆಯೂ ಕೇಂದ್ರ ಕ್ರಿಮಿನಾಶಕ ಮಂಡಳಿ ಹಾಗೂ ನೋಂದಣಿ ಸಮಿತಿ (ಸಿಐಬಿಆರ್್ಸಿ) ಮತ್ತು ಸಸಿ ಸಂರಕ್ಷಣೆ ಜಾರಿ ನಿರ್ದೇಶನಾಲಯ ಸೇರಿದಂತೆ ಹಲವಾರು ಇಲಾಖೆಗಳಿಗೆ ಸೂಚನೆ ನೀಡಿತ್ತು. ಅಲ್ಲದೆ ಎಂಡೋಸಲ್ಫಾನ್ ಮಾರಾಟ ಮತ್ತು ತಯಾರಿಕಾ ಕಂಪನಿಗಳಿಗೂ ತಿಳಿಸಿತ್ತು. ಆದರೆ ಈ ಆದೇಶಕ್ಕೆ ಬೆಲೆ ಕೊಡದ ಕಂಪನಿಗಳು ತಮ್ಮ ನೋಂದಣಿ ಪ್ರಮಾಣ ಪತ್ರ ನೀಡದೆ ನಿರ್ಲಕ್ಷ್ಯ ತಾಳಿದವು. ನಂತರ ಸಿಐಬಿಆರ್್ಸಿ ತಾನೇ ವಾಪಸ್ ಪಡೆದುಕೊಂಡು ಪುನಃ ಸುಪ್ರೀಂನ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿ ಕೊಂಡಿತು.

ಎಂಡೋ ನಿಷೇಧದ ಬಗ್ಗೆ ಸುಪ್ರೀಂ ಇಂಥ ಆದೇಶ ಕೊಟ್ಟಾಗಲೂ ಕೀಟನಾಶಕವನ್ನು ಹಿಂಪಡೆಯುವ ಮನಸ್ಸು ಮಾಡಲಿಲ್ಲ. ಅಂದರೆ ತಾವು ನಿಷೇಧ ಮಾಡಿದ್ದೇವೆ ಎಂದಾಗಬೇಕು. ಔಷಧಿ ಯಥಾ ಪ್ರಕಾರ ಮಾರಾಟವಾಗುತ್ತಿರಬೇಕು ಎಂಬ ಧೋರಣೆಯೇ?

ಇನ್ನೊಂದೆಡೆ, ಎಂಡೋ ಪೀಡಿತ ಪ್ರದೇಶದ ಜನರ ಪತ್ರ ಹೋರಾಟ, ಜಾಗೃತಿ ಕಾರ್ಯ ನಡೆಯುತ್ತಿದ್ದರೂ ಅಲ್ಲಿನ ಶಾಸಕರಾಗಲಿ, ಸಂಸದರಾಗಲಿ ತುಟಿ ಬಿಚ್ಚದಿರುವುದು ಮಾತ್ರ ಸೋಜಿಗದ ಸಂಗತಿ. ಕರ್ನಾಟಕದಲ್ಲಿ ಎಂಡೋ ಬಾಧಿತರಿರುವುದು ಕೇಂದ್ರ ಸರ್ಕಾರದ ಕಣ್ಣಿಗೆ ಬೀಳಲೇ ಇಲ್ಲ. ಇದಕ್ಕೆ ಕಾರಣ ನಾವು ಕೇಂದ್ರದಲ್ಲಿ ನಮ್ಮ ಬಗ್ಗೆ ಮಾತಾಡಿ ಎಂದು ಕಳುಹಿಸಿದ ಜನಪ್ರತಿನಿಧಿಗಳು. ನಮ್ಮ ರಾಜ್ಯದ ನಾಲ್ಕು ಮಂದಿ ಸಚಿವರಿದ್ದಾರೆ. ಅದರಲ್ಲಿ ಒಬ್ಬರು ಎಂಡೋ ಬಾಧಿತ ಜಿಲ್ಲೆಯವರೇ. ಇವರು ತಮ್ಮವರಿಗೆ ಹೀಗಾಯಿತಲ್ಲ, ಇವರ ನೆರವಿಗೆ ಏನಾದರೂ ಸಹಾಯ ಮಾಡುವ ಕಳಕಳಿಯನ್ನು ತೋರಿಸಲಿಲ್ಲ. ಇಬ್ಬರು ಸಂಸದರು, ಒಬ್ಬರು ಸಚಿವರು ಇದೇ ಜಿಲ್ಲೆಯವರಿದ್ದರೂ ಈ ಸಂತ್ರಸ್ತರಿಗೆ ಕನಿಷ್ಠ ಉಪಕಾರವೂ ಆಗದಿರುವುದು ವಿಷಾದನೀಯ.

ಇನ್ನು ಬೆಳ್ತಂಗಡಿಗಿಂತ ಪುತ್ತೂರು ತಾಲೂಕಿನಲ್ಲೇ ಹೆಚ್ಚು ಮಂದಿ ಎಂಡೋ ಬಾಧಿತರಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಆದರೆ ಇಲ್ಲಿನ ಶಾಸಕರಿಗೆ ಮಾತ್ರ ಈ ವಿಚಾರ ಗೊತ್ತಿದ್ದಂತೆ ಕಾಣುವುದಿಲ್ಲ. ಇವರು ಒಂದು ದಿನವೂ ಸಂತ್ರಸ್ತರ ನೋವಿಗೆ ಸ್ಪಂದಿಸಲು ಈ ಗ್ರಾಮಗಳಿಗೆ ಬಂದ ದಾಖಲೆ ಇಲ್ಲ.

ನೂರಾರು ಮಂದಿ ಮಲಗಿದಲ್ಲೇ ಜೀವನ ಕಳೆಯುತ್ತಿದ್ದಾರೆ. ಸಾವಿರಾರು ಜನರಿಗೆ ವಿವಿಧ ಕಾಯಿಲೆಗಳು ಅಟಕಾಯಿಸಿದೆ. ಇದಕ್ಕೆಲ್ಲ ಕಾರಣ ಅವೈಜ್ಞಾನಿಕವಾಗಿ ಎಂಡೋವನ್ನು ವೈಮಾನಿಕವಾಗಿ ಸಿಂಪರಣೆ ಮಾಡಿರುವುದು ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (ಕೆಸಿಡಿಸಿ) ತಲೆಯಲ್ಲಿ ಏನಿತ್ತೋ ಏನೋ, ವಿದೇಶಗಳಲ್ಲಿ ಕೀಟನಾಶಕ ಸಿಂಪಡಿಸುವ ರೀತಿಯಲ್ಲಿ ಇಲ್ಲಿಯೂ ಹೆಲಿಕಾಪ್ಟರ್ ಬಳಸಿತು. ಕೀಟನಾಶಕದ ಮಳೆಯನ್ನೇ ಸುರಿಸಿತು. ಪ್ಲಾಂಟೇಷನ್ ಅಕ್ಕಪಕ್ಕ ಮನೆಗಳಿರುತ್ತವೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿತು.

ಎಂಡೋ ಸಿಂಪರಣೆ ಮಾಡುವಾಗ ಖುದ್ದು ಹಳ್ಳಿಗಳಿಗೆ ಹೋಗಿ ಹೀಗೊಂದು ಕೆಲಸ ಮಾಡುತ್ತಿದ್ದೇವೆ ಜಾಗೃತಿಯಲ್ಲಿರಿ ಎನ್ನುವ ಮಾತನ್ನು ಹೇಳಲಿಲ್ಲ. ಬದಲಾಗಿ ಲೋಕಲ್ ಪತ್ರಿಕೆಗಳಲ್ಲಿ ಪುಟ್ಟ ಜಾಹೀರಾತು ನೀಡಿತು. ಈ ಭಾಗದಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಅಲ್ಲದೇ ಪತ್ರಿಕೆಗಳ ಲಭ್ಯತೆಯು ಅಷ್ಟಕಷ್ಟೆ. ಈ ಜಾಹೀರಾತನ್ನು ನೀಡಿದ್ದು ಕೇವಲ ಮೂರು ವರ್ಷ ಎನ್ನುವುದು ಮಾಹಿತಿ ಹಕ್ಕಿನ ಆಧಾರದಲ್ಲಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ. ಎರಡು ದಶಕಗಳ ಕಾಲ ಕೆಸಿಡಿಸಿ ಮಾಡಿದ ವೈಮಾನಿಕ ಸಿಂಪರಣೆಯಿಂದ ಆದ ಬಾನಗಡಿ ಮೂರು ತಲೆಮಾರಿನವರು ನೆನಪಿನಲ್ಲಿಡಬಹುದಂಥದ್ದು. ಇನ್ನು, ಹಲವಾರು ಮಂದಿ ಹಾಸಿಗೆಯಲ್ಲೇ ಇರುವಂತೆ ಮಾಡಿದ ಕೆಸಿಡಿಸಿಯ ಮೇಲೆ ಈವರೆಗೂ ಯಾರೂ ಒಂದೇ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಕೋರ್ಟ್್ಗೆ ಸಲ್ಲಿಕೆಯಾಗಲಿಲ್ಲ. ಆ ಹೋರಾಟ, ಈ ಹೋರಾಟ ಮಾಡುವ ಸಂಘಟನೆಗಳು ನಮ್ಮಲ್ಲಿ ಇವೆ. ಆದರೆ ಈ ಯಾವ ಸಂಘಟನೆಗಳಿಗೂ ಇಲ್ಲಿನ ಸಮಸ್ಯೆ ಇನ್ನು ಕಾಣದಿರುವುದು ಸೋಜಿಗದ ವಿಷಯ.

ಇವೆಲ್ಲಕ್ಕಿಂತ ಮುಖ್ಯ ಸಂಗತಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪ್ರಮುಖರು ಆಡಿದ ಮಾತು. ಎಂಡೋದಿಂದ ಮಾನವನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಕೊಡಿ ಎಂದು ಕೇಳಿದಾಗ, ತನಗೆ ಮೂರು ವರ್ಷದ ಕಾಲಾವಕಾಶ ಬೇಕು ಎಂದಿದೆ. ಆದರೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ 2005ರಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಪ್ರತಾಪ್ ಕುಮಾರ್ ಅವರು 2003 ರಿಂದ 2005ರವರೆಗೆ ಅಧ್ಯಯನ ನಡೆಸಿ ಐಸಿಎಂಆರ್್ಗೆ ವರದಿ ಸಲ್ಲಿಸಿತ್ತು. ಈ ಅಧ್ಯಯನ ವರದಿ ತಯಾರಿಸಲು ಸಾರ್ವಜನಿಕರ ಅಂದರೆ ತೆರಿಗೆ ಹಣವೇ ಅನುದಾನವಾಗಿ ಬಳಕೆಯಾಗಿದ್ದು. ಇದರ ಮೊತ್ತ ಸುಮಾರು 8 ಲಕ್ಷ ರುಪಾಯಿ.

ಅಲ್ಲ, ಐಸಿಎಂಆರ್್ನಂಥ ಸಂಸ್ಥೆಗೆ ತಾವು ತಯಾರಿಸಿಟ್ಟುಕೊಂಡ ಅಧ್ಯಯನ ಇರುವುದೇ ಗೊತ್ತಿರಲಿಲ್ಲವೇ? ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಐಸಿಎಂಆರ್್ನವರು ಪುನಃ ಮಣಿಪಾಲ ಮೆಡಿಕಲ್ ಕಾಲೇಜಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡು ಅಧ್ಯಯನ ವರದಿ ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಎಂಡೋನಿಂದ ಪುರುಷತ್ವವೇ ನಾಶವಾಗುತ್ತದೆ ಮತ್ತು ಹುಟ್ಟುವ ಮಕ್ಕಳು ಸರಿಯಾಗಿ ಹುಟ್ಟುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಇಂಥ ಗಂಭೀರ ಸಮಸ್ಯೆ ಇರುವುದು ಐಸಿಎಂಆರ್ ಅವರ ಗಮನಕ್ಕೆ ಬಂದಿಲ್ಲವೇ? ಬಂದಿದ್ದರೆ ಅಂದೇ ಅಂದರೆ ಆರು ವರ್ಷದ ಕೆಳಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿತ್ತು. ಯಾವುದಾದರೂ ಮಾಧ್ಯಮದ ಮೂಲಕ ತಿಳಿಸಬೇಕಿತ್ತು. ಆ ಕೆಲಸವನ್ನು ಮಾಡದೆ ಅಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ. ಇದು ಕಾನೂನು ಉಲ್ಲಂಘನೆ. ಮಾನವನ ಜೀವನದ ಮೇಲೆ ಆಟವಾಡುವ ಕೆಲಸವನ್ನು ಐಸಿಎಂಆರ್ ಮಾಡಿದೆ.

ಇದನ್ನೆಲ್ಲ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗಮನಿಸುತ್ತಿದ್ದಾರೆಯೇ?

ಇವರು ಗಮನಿಸಿದರೆಷ್ಟು, ಬಿಟ್ಟರೆಷ್ಟು... ಕ್ರಿಕೆಟ್ ಟೀಮ್ ಕಟ್ಟುವುದರಲ್ಲೇ ಸದಾ ಬ್ಯುಸಿಯಾಗಿರುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಯ ಚಿಂತೆ ಕಾಡುವುದಿಲ್ಲವೇ? ಇಷ್ಟೆಲ್ಲ ಅವಾಂತರ ಮಾಡಿದ ಎಂಡೋ ಬೇಕು ಎನ್ನುವುದಾಗಿ ಇವರು ಹೇಳುತ್ತಾರೆ. ಇದರ ಹಿಂದಿನ ಸತ್ಯವೇನು?

ರಾಜಕೀಯ ವ್ಯಕ್ತಿಗಳು, ಕಂಪನಿಯವರ ಮೇಲಾಟದಲ್ಲಿ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

-ನಾಗರಾಜ ಮತ್ತಿಗಾರ

Monday, March 21, 2011

ಅಕ್ಕೋರು ಅಕ್ಕೋರೆ...

ಶಿಕ್ಷಕರ ದಿನಾಚರಣೆ ಬಂತೆಂದರೆ ಸುಮಾರು ಇಪ್ಪತ್ತು ವಷ೯ದ ಹಿಂದೆ ನೆನಪು ಓಡುತ್ತದೆ. ಅಂದು ಅಲ್ಲಿ ಎಷ್ಟು ಸಂಭ್ರಮವಿತ್ತು. ಹೊಳೆಯಂಚಿನಲ್ಲಿ ಚಿಗುರೊಡೆದು ನಿಂತಿದ್ದ ಮಾವಿನ ಗಿಡ ಹಾಳಾದರೂ ಪರವಾಗಿಲ್ಲ ಶಾಲೆಗೆ ಭಜ೯ರಿ ತೋರಣ ಕಟ್ಟಲಾಗುತ್ತಿತ್ತು. ಹರಿದ ಅಂಗಿಯನ್ನೇ ಹೊಲಿದು. ಅಪ್ಪನೂ ಹಾಕಿಕೊಳ್ಳಬಹುದಾದ, ಸಕಾ೯ರ ಕೊಡುತ್ತಿದ್ದ ಕಾಕಿ ಚೆಡ್ಡಿಯನ್ನು ಧಾರದಿಂದ ಬಿಗಿಯಾಗಿ ಕಟ್ಟಿಕೊಂಡು ಶಿಕ್ಷಕರ ದಿನಾಚರಣೆಗೆ ಹಾಜರಾಗುತ್ತಿದ್ದ ಕಾಲ.
ಧ್ವಜಾರೋಹಣ, ಮಳೆ ಇಲ್ಲದಿದ್ದರೆ ಒಂದು ಫಲಾ೯ಂಗ್ ಪ್ರಭಾತಪೇರಿ. ನಂತರ ಸಭೆ, ಅಲ್ಲಿ ಮಕ್ಕಳ ಭಾಷಣ. ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ ಮತ್ತು ಮಿತ್ರರೇ ... ಇಂದು ಶಿಕ್ಷಕರ ದಿನಾಚರಣೆ. ಒಂದು ಅಕ್ಷರವನ್ನು ಕಲಿಸಿದವರನ್ನು ಗುರುವಾಗಿ ಸ್ವೀಕರಿಸಬೇಕಂತೆ .....ಇತ್ಯಾದಿ ಇತ್ಯಾದಿ ಹೇಳಿ ಮಧ್ಯದಲ್ಲಿ ಒಮ್ಮೆ ಗಾಂಧಿ ತಾತನನ್ನು ನೆನೆದು ಭಾಷಣ ಮುಗಿಯುತ್ತಿತ್ತು. ಇದರ ಅಥ೯ ಬರೆದು ಕೊಟ್ಟ ಅಣ್ಣನಿಗೋ, ಅಕ್ಕನಿಗೋ ಅಥವಾ ಅಪ್ಪನಿಗೆ ಮಾತ್ರ ಗೊತ್ತಾಗಿರುತ್ತಿತ್ತು ಬಿಟ್ಟರೆ ಭಾಷಣ ಮಾಡಿದವರಿಗೆ ಅಲ್ಲ.
ಇದೆಲ್ಲವನ್ನು ಮಕ್ಕಳು ಮಾಡುತ್ತಿದ್ದದ್ದು ಒಂದೇ ಕಾರಣಕ್ಕಾಗಿ ಅಕ್ಕೋರು (ಟೀಚರ್) ಹೇಳಿದ್ದಾರೆ. ಮನೆಯಲ್ಲಿ ಹೆತ್ತ ತಾಯಿ ಆದರೆ ಶಾಲೆಯಲ್ಲಿ ಅಕ್ಕೋರೆ ಅಮ್ಮ. ಅವರು ಹೊಡೆಯುತ್ತಿದ್ದರು ಆದರೆ ಮರುಕ್ಷಣದಲ್ಲೇ ಅವರು ಮುದ್ದಿಸುತ್ತಿದ್ದರು. ಹೊಸ ಆಟವನ್ನು ಹೇಳಿಕೊಡುತ್ತಿದ್ದರು. ಆಗಿನ ಹುಡುಗರು ಈಗಿನ ಮಕ್ಕಳಷ್ಟು ಶಾಪ್್೯ ಅಲ್ಲ, ಬೊಡ್ಡು. ಅಕ್ಕೊರು ಏನೇ ಹೇಳಿದರೂ ಅದು ಸತ್ಯ. ಗುರೂಜಿ (ಮೇಷ್ಟ್ರು) ಹೇಳಿದರೂ ನಂಬುತ್ತಿರಲಿಲ್ಲ ಕಾರಣ ಅಕ್ಕೋರು ಅಂದ್ರೆ ಸತ್ಯದ ಮತ್ತೊಂದು ರೂಪ ಎನ್ನುವ ಕಲ್ಪನೆ ಮಕ್ಕಳಲ್ಲಿ ಇತ್ತು. ಅಕ್ಕೋರು ಒಂದು ಪೆಟ್ಟು ಕೊಟ್ಟರೂ ಮನೆಗೆ ಬಂದು ಹೇಳುತ್ತಿರಲಿಲ್ಲ. ಆದರೆ ಗುರೂಜಿ ಹೊಡೆದರೆ ಅಳುತ್ತ ಮನೆಯವರೆಗೂ ಓಡಿದ ದಾಖಲೆಗಳಿವೆ.
ಅಕ್ಕೋರ ಮೇನೆ ಯಾಕೀಷ್ಟು ಪ್ರೀತಿ
ಇದಕ್ಕೂ ಕಾರಣಗಳವೆ. ಬಹುತೇಕ ಹಳ್ಳಿಗಳಲ್ಲಿ ಅಂಗನವಾಡಿಗಳಿರಲಿಲ್ಲ. ಮಗು ನಾಲ್ಕನೇ ವಷ೯ಕ್ಕೆ ಕಾಲಿಟ್ಟ ಕೂಡಲೇ, ಮನೆಯಲ್ಲಿ ಕೆಟ್ಟ ಕಿಲಾಡಿ ಶಾಲಿಗಾದ್ರೂ ಕಳಿಸಿ ಎನ್ನುವ ಫಮಾ೯ನು ಮನೆಯಲ್ಲಿ ಹೊರಡುತ್ತಿತ್ತು. ಊರಿಂದ ಶಾಲೆಗೆ ಹೋಗುವ ದೊಡ್ಡ ಮಕ್ಕಳ ಜೊತೆಗೆ ಈ ಮಕ್ಕಳು ಹೋಗುತ್ತಿದ್ದರು. ಆ ತರಗತಿಗೆ ಒಂದು ಹೆಸರು ಭಿನ್ನೆತಿ. ಅಂದರೆ ಇಂಗ್ಲಿಷ್ ಭಾಷೆಯಲ್ಲಿ ಹೇಳಬೇಕೆಂದರೆ ಎಲ್ಕೆಜಿ, ಯುಕೆಜಿ ಇದ್ಹಾಂಗೆ. ಈ ಚಿಳ್ಳೆ ಪಿಳ್ಳೆಗಳನ್ನು ಸಂಭಾಳಿಸುವ ಹೊಣೆಗಾರಿಕೆ ಅಕ್ಕೋರ ತಲೆ ಮೇಲೆ.
ನಾಲ್ಕು, ಐದು ವಷ೯ದ ಮಕ್ಕಳಿಗೆ ಏನು ಗೊತ್ತಾಗ ಬೇಕು? ಹಸಿವಾದರೆ ಅಕ್ಕೋರೆ ಹಸ್ವಾತು... ಎನ್ನುತ್ತಿದ್ದವು. ಅಕ್ಕೋರು ಬಹಳ ಹುಷಾರು ಇವರಿಗಾಗೆಯೇ ಬಿಸ್ಕತ್್ ತಂದಿಟ್ಟು ಕೊಳ್ಳುತ್ತಿದ್ದರು. ಇನ್ನು ಈ ಮಕ್ಕಳೋ ಒಂದಾ, ಎರಡನ್ನು ಸಹ ಶಾಲೆಯ ಪಡಸಾಲೆಯಲ್ಲಿ ಮಾಡಿ ಬಿಡುತ್ತಿದ್ದವು. ಅದನ್ನು ಚೊಕ್ಕ ಮಾಡುವ ಸರದಿ ಅಕ್ಕೋರದಾಗಿರುತ್ತಿತ್ತು. ಹೀಗೆ ತಾಯಿಯಂತೆ ಅಕ್ಕೋರು ಮಕ್ಕಳನ್ನು ಬೆಳೆಸುತ್ತಿದ್ದರು. ಈ ಮಕ್ಕಳಿಗೂ ಅಕ್ಕೋರು ಅಂದರೆ ದೇವರ ಪ್ರತಿ ರೂಪದಂತೆ ಭಾಸವಾಗುತ್ತಿತ್ತು.
ಅಕ್ಕೋರ ಮೇಲೆ ಪ್ರೀತಿ ಎಷ್ಟಿರುತ್ತಿತ್ತು ಎಂದರೆ ಮನೆಯಲ್ಲಿ ಒಂದೇ ಒಂದು ದಾಸವಾಳದ ಹೂ ಬಿಟ್ಟಿರಲಿ ದೇವರ ಮುಡಿ ಸೇರುವ ಮೊದಲು ಅಕ್ಕೋರ ತಲೆಯಲ್ಲಿ ಇರುತ್ತಿತ್ತು. ಮನೆಯಲ್ಲಿ ವಿಶೇಷ ಅಡುಗೆ ಮಾಡಿದರು ಅಕ್ಕೋರಿಗೆ, ಮಾವಿನ ಮಿಡಿ ಉಪ್ಪಿನಕಾಯಿ ಮಾಡಿದರೆ ಒಂದು ಬಾಟಲಿ ಉಪ್ಪಿನಕಾಯಿ ಅವರಿಗೆ ಸಂದಾಯಿತವಾಗುತ್ತಿತ್ತು. ಆದರೆ ಇದು ಲಂಚವಾಗಿರಲಿಲ್ಲ ಪ್ರೀತಿಯ, ಗೌರವದ ಕಾಣಿಕೆಯಾಗಿರುತ್ತಿತ್ತು.
ಕೀಟಲೆಯೂ ತಪ್ಪುತ್ತಿರಲಿಲ್ಲ
ಅಕ್ಕೋರು ಶಾಲೆ ಬರುತ್ತಿದ್ದಂತೆ ಕೆಲವು ಮಕ್ಕಳ ಹಾಡು ಶುರುವಾಗುತ್ತಿತ್ತು. ಅಕ್ಕೋರ್ ಅಕ್ಕೋರೆ ನಾಗಮ್ಮಕ್ಕೋರೆ ಕಬ್ಬಿನ ಗದ್ದೆಗೆ ದಿಬ್ಬಣ ಬಂತು ನೋಡ್ ಅಕ್ಕೋರೆ ಎನ್ನುವ ಹಾಡು. ಕೋಪ ಬಂದ ಅಕ್ಕೋರು ನೆಲ್ಲಿ ಕೋಲು ಪುಡಿಯಾಗುವರೆಗೆ ಹೊಡೆಯುತ್ತಿದ್ದರು. ನಂತರ ಯಾಕ್ರೋ ಹೀಗೆ ಗೋಳು ಹೋಯ್ತಿರಾ? ಎನ್ನುತ್ತ ನೋವಾಯ್ತೆನ್ರೋ? ಛೇ ಹೊಡಿಬಾರದಿತ್ತು ಎಂದು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದ ಪರಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿತ್ತು. ತಿಂಗಳು ಕಾಲ ಅಕ್ಕೋರಿಗೆ ವಿಧೇಯರಾಗಿ ಯಥಾ ಪ್ರಕಾರ ಮತ್ತೆ ಹಾಡು, ಹಾಗೆ ಹೊಡೆತ, ಮತ್ತೆ ಸಮಾಧಾನ. ಅಷ್ಟೇ ಅಲ್ಲ, ಈಗಿನ ಹುಡುಗರ ರೀತಿ ಸ್ಟಾಂಡರ್ಡ್ ಮಕ್ಕಳು ಅಂದಿರಲಿಲ್ಲ. ಹೊಡೆದಾಟ, ಹೆಣ್ಣು ಮಕ್ಕಳಿಗೆ ರಗಳೆ ಕೊಡುವ ಹುಡುಗರು. ಆಟಕ್ಕೆ ಬಿಟ್ಟು ಮತ್ತೆ ಕ್ಲಾಸಿಗೆ ಸೇರಿಸಿಕೊಳ್ಳುವ ರೀತಿಯಲ್ಲಿ ಮಕ್ಕಳು ಇರುತ್ತಿರಲಿಲ್ಲ. ಮಳೆಗಾಲವಾದರೆ ಅರಲು, ಬೇಸಿಗೆಯಾದರೆ ಧೂಳು ಮೈಮೆತ್ತಿಕೊಂಡಿರುತ್ತಿತ್ತು. ಇದನ್ನೇಲ್ಲ ಸಹಿಸಿಕೊಂಡು ಪಾಠ ಮಾಡುತ್ತಿದ್ದರಲ್ಲ ಆ ಅಕ್ಕೋರುಗಳು ಮೆಚ್ಚಲೇ ಬೇಕು.
ಪರ ಊರ ಅಕ್ಕೋರು
ಇನ್ನೂರು, ಮೂನ್ನೂರು ಮೈಲು ದೂರದ ಊರಿಂದ ಈ ಅಕ್ಕೋರುಗಳು ಹಳ್ಳಿಗಳಿಗೆ ಬಂದಿರುತ್ತಿದ್ದರು. ಯಾರದ್ದೋ ಮನೆಯಲ್ಲಿ ವಾಸ್ತವ್ಯ. ಊರಿಗೆ ಹೋಗುವುದು ಅಂದರೆ ವಷ೯ಕ್ಕೆ ನಾಲ್ಕು ಬಾರಿ. ಈಗಿನ ತರಹ ಮೊಬೈಲ್್, ದೂರವಾಣಿ ಇರಲಿಲ್ಲ. ಇಂಗ್ಲೆಂಡ್ ಪತ್ರವೊಂದೇ ಸಂಪಕ೯ ಸೇತುವೆ. ನಾಲ್ಕು ದಿನ ಹಿಂದೆ ಬಂದ ಪತ್ರವನ್ನು ಐದನೇ ದಿನ ತಂದು ಕೊಡುವ ಪೋಸ್ಟ್್ಮನ್. ಅವನಿಗೆ ಬೈದಿರೆ ಮುಂದಿನ ಪತ್ರ ಇವರಿಗೆ ತಲುಪುದು ಮತ್ತು ತಡ. ಇದನ್ನೇಲ್ಲ ಸಹಿಸಿಕೊಂಡು, ಊರನ್ನು ಮರೆತು ಇರುವ ಊರನ್ನೇ ತಮ್ಮ ಊರೆಂದು ಹೊಂದಿಕೊಂಡು ಪಾಠ ಮಾಡುತ್ತಿದ್ದರಲ್ಲ ಆ ಶಿಕ್ಷಕರನ್ನು ಮರೆಯುವುದಕ್ಕೆ ಅಸಾಧ್ಯ
ಇನ್ನು ಇವರಿಗೆ ನಗರ ಸಂಪಕ೯ ತಿಂಗಳಿಗೊಮ್ಮೆ ಮಾತ್ರ. ಅದೂ ಬಿಇಓ ಮೀಟಿಂಗ್ ಕರೆದರೆ ಮಾತ್ರ ಸುಖಾಸುಮ್ಮನೆ ಹೋಗಿಬರಲಿಕ್ಕೆ ನೆರವು ಯಾರು ಇವರಿಗೆ. ಬಸ್ ಹತ್ತಿ ಪೇಟೆಗೆ ಹೋಗಬೇಕೆಂದರೆ ನಾಲ್ಕು ಮೈಲಿ ನಡೆದು ಬಸ್ ಹತ್ತಿ ಶಹರ ಸೇರಬೇಕಿತ್ತು. ಮೇಷ್ಟ್ರಾದರೆ ಸೈಕಲ್ ಹತ್ತಿ ಹೋಗುತ್ತಿದ್ದರು. ತಮ್ಮ ಅಗತ್ಯಗಳನ್ನು ಯಾರು ಪೇಚೆಗೆ ಹೋಗುತ್ತಾರೋ ಅವರ ಹತ್ತಿರ ಹೇಳಿ ಪೂರೈಸಿಕೊಳ್ಳ ಬೇಕಿತ್ತು ಹಳ್ಳಿ ಟೀಚರ್ಗಳಿಗೆ.
ಬದಲಾಗಿದೆ ಕಾಲ
ಹಳ್ಳಿಗೆ ಹೋಗಿ ಪಾಠ ಮಾಡಲಿಕ್ಕೆ ಈಗಿನ ಮೇಡಂಗಳು ಮನಸ್ಸು ಮಾಡಲ್ಲ. ಒಮ್ಮೆ ಮಾಡಿದರೂ ಶಾಲೆಯವರೆಗೆ ಟಾರ್ ರೋಡ್ ಇರಬೇಕು. ಇವರು ಸ್ಕೂಟಿ ತಗೊಂಡಿರುತ್ತಾರೆ. ಶಾಲೆ ಗಂಟೆ ಹೊಡೆಯುವ ಅವಧಿಗೆ ಹೋಗಿ ತಲುಪುತ್ತಾರೆ. ಮುಗಿದ ಕೊಡಲೇ ಹೊರಡುತ್ತಾರೆ. ಬಿನ್ನೆತಿ ಈಗಿಲ್ಲ. ಅಂಗನವಾಡಿಯಾಗಿದೆ. ಆಗಿನ ಹಾಗೇ ಕಿಲಾಡಿ ಮಕ್ಕಳು ಈಗಿಲ್ಲ. ಮೇಸ್ಟ್ರ ಮಂದಿಗೆ ಇವರು ಪಾಠ ಮಾಡಿ ಬರುತ್ತಾರೆ. ಹೊಡೆಯುವ ಹಾಗಿಲ್ಲ. ಕಾನೂನು ಪ್ರಕಾರ ತಪ್ಪು. ಅರಲು, ಧೂಳು ಮೈಕೈಗೆ ಮೆತ್ತಿಕೊಳ್ಳದ ಮಕ್ಕಳು ಯಾಕೆಂದರೆ ಇವರ ಆಟದ ಅವಧಿಯೇ ಕಡಮೆಯಾಗಿದೆ. ಲಗೋರಿ, ಕಬ್ಬಡಿ, ಕೋ.ಕ್ಕೋ ಇವರಾಡುವು ಕ್ರೀಡಾ ಕೂಟದ ಸಮಯದಲ್ಲಿ ಮಾತ್ರ. ಅಕ್ಕೋರು ಕಾಣೆಯಾಗಿ ಮೇಡಂಗಳು ಬಂದಿದ್ದಾರೆ.
ಜಮಾನ ಬದಲಾಗಿದೆ ಆದರೆ ಅಂದು ಅಕ್ಕೋರು ಎಂದು ಬಾಯ್ತುಂಬ ಕರೆಯುತ್ತಿದ್ದವರಿಗ ಅಕ್ಕೋರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಏನೇ ಇರಲಿ, ಹಳ್ಳಿ ಶಾಲೆಯಲ್ಲಿ ಅಂದು ಪಾಠ ಮಾಡಿದ್ದ ಅಕ್ಕೋರಿಗೆ, ಕಾಲಕ್ಕೆ ತಕ್ಕಂತೆ ಬದಲಾಗಿ ಇಂದು ಪಾಠ ಮಾಡುತ್ತಿರುವ ಮೇಡಂಗಳಿಗೆ ನಿಮ್ಮ ಪ್ರಿತಿಯ ವಿದ್ಯಾಥಿ೯ಗಳ ನಮನಗಳು.
(ಕನ್ನಡಪ್ರಭ ಸಖಿ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ)

Tuesday, February 1, 2011

ಕಾಲದ ರೀಕಾಲ್

ಏನನ್ನು ಯೋಚನೆ ಮಾಡದೆ ಸುಮ್ಮನೆ ಕುಳಿತುಕೊಳ್ಳಬೇಕು ಅನ್ನಿಸುತ್ತದೆ. ಆದರೆ ಅದು ಸಾಧ್ಯವೆ ಆಗುವುದಿಲ್ಲ. ಇಂಥ ಸಮಯದಲ್ಲಿ ಬದುಕು ರೀಕಾಲ್್ ಆಗುತ್ತದೆ. ಈ ಸಮಯದಲ್ಲಿ ನೆನಪಿಗೆ ಬಂದ ಒಂದು ಘಟನೆಯನ್ನು ನೆನಪಿಸಿಕೊಳ್ಳಬೇಕು ಅನ್ನಿಸುತ್ತಿದೆ.
1996-97ನೇ ಇಸವಿ ನಾನು ಎಸ್ಸೆಎಲ್ಸಿ. 97ರ ಜೂನ್ ಮೂವತ್ತು ಫಲಿತಾಂಶದ ದಿನ. ನಾನು ಪಾಸಾಗುತ್ತೇನೆಂದು ನಾನು ಎಂದು ಎಣಿಸಿರಲಿಲ್ಲ. ಪರೀಕ್ಷೆ ಮುಗಿದ ನಂತರ ನಾನು ಮಾಕ್ಸ೯ ಹಾಕಿಕೊಳ್ಳುತ್ತಿದೆ. ಅದು ಶೇ 90 ರಷ್ಟು ಸರಿ ಇರುತ್ತಿತ್ತು. ನಾನು ಓದುವ ಕ್ರಮವೇ ಹಾಗಿತ್ತು. 50 ಮಾಕ್ಸ೯ ಬಂದರೆ ಸಾಕು ಎಂಬಂತೆ. ಆಗಲೂ ಹಾಗೇ ಅಂಕ ಹಾಕಿಕೊಂಡಿದ್ದೆ. ಇನ್ನೊಂದು ಗಮ್ಮತ್ತಾಯಿತು. ನಾನು 10ನೇ ಇಯತ್ತೆ ಪರೀಕ್ಷೆ ಬರೆದ ನಂತರ ಅಂಕ ಹಾಕಿಕೊಂಡೆ. ನನ್ನ ಪ್ರಕಾರ ಗಣಿತದಲ್ಲಿ 100ಕ್ಕೆ 100 ಫೇಲ್ ಆಗುತ್ತೇನೆ ಎನ್ನುವಷ್ಟು ಅಂಕ ಹಾಕಿಕೊಂಡಿದ್ದೆ. ಸರಿಯಾಗಿ 18 ಅಂಕ ಬಿತ್ತು. ನನಗೆ ಅಪ್ಪುಟು ಬೇಜಾರ ಆಗಲಿಲ್ಲ.
ನಮಗೆ ಪರೀಕ್ಷೆ ನಡೆಯುವ ಸಮಯದಲ್ಲಿ ಗುಡಗೇರಿ ನಾಟಕದ ಕಂಪನಿ ಸಿದ್ದಾಪುರದಲ್ಲಿ ಇತ್ತು. ಗಣಿತ ಪರೀಕ್ಷೆಯ ಹಿಂದಿನ ದಿನ ಬಸ್ ಕಂಡಕ್ಟರ್ ನಾಟಕ ನೋಡಲು ಹೋಗಿದ್ದೆ. ಲೆಕ್ಕ ಹಾಕಿ ನನ್ನ ಹುಂಬತನ ಹೇಗಿತ್ತೆಂದು.
ನಪಾಸ್ ಆದ ನಾಗುಮಾಣಿ ಎಂದು ಊರಲ್ಲಿ ಸುದ್ದಿ ಹರಡಲು ಬಹಳ ಸಮಯ ಹಿಡಿಯಲಿಲ್ಲ. ಮನೆಯಲ್ಲಿ ಮಾತ್ರ ನಾನೆನಾದರು ಬೇಜಾರ ಮಾಡಿಕೊಂಡು ಬಿಟ್ಟೇನು ಎಂದು ಸಾಂತ್ವನ ಹೇಳಿದರು. ಅಕ್ಟೋಬರ್ ಪರೀಕ್ಷೆ ಮಾಡುವುದು ನಿನಗಾಯೇ ಮತ್ತು ನಿನ್ನಂಥವರಿಗೆ ಎಂದರು.
ಕಲಿತದ್ದು ಬಹಳ...
ಫೇಲ್ ಆಗಿದ್ದು ಚೋಲೋ ಆಯಿತು ಅಂಥ ಇನ್ನು ಒಮ್ಮೊಮ್ಮೆ ಅನ್ನಿಸುತ್ತದೆ. ಯಾಕೆಂದ್ರೆ ಪುಸ್ತಕ ಓದುವ ರೂಢಿ ಪ್ರಾರಂಭವಾಯಿತು. ನನಗೆ ಮನೆಯಲ್ಲಿ ದನ ಕಾಯುವ ಕೆಲಸಕ್ಕೆ ವಹಿಸಿದರು.ಗೋಪಾಲಕನ ಕೆಲಸ ಕಡಿಮೆಯೇ...ಕೖಷ್ಣನ ಕೆಲಸವನ್ನು ಮಾಡುವ ಭಾಗ್ಯ ನನ್ನದಾಯಿತು.
ಪತ್ತೇದಾರಿ ಕಾದಂಬರಿ ಓದಲಿಕ್ಕೆ ಪ್ರಾರಂಭಿಸಿದೆ. ಹಾಗೇ ಭೈರಪ್ಪ, ಅನಂತಮೂತಿ೯, ತರಾಸು, ದೇವಡು, ತೇಜಸ್ವಿ ಎಲ್ಲರ ಪುಸ್ತಕವನ್ನು ಓದಿದೆ. ಅಕ್ಚೋಬರ್ನಲ್ಲಿ ಪರೀಕ್ಷೆ ಪಾಸು ಆದೆ...
ಅಂದು ಫೇಲ್ ಆದೆ...ಜೀವನಕ್ಕಾಗಿ ಬೇಕಾದ ಕೆಲಸ ಕಲಿತೆ.. ತೋಟ, ಗದ್ದೆ ಕೆಲಸ ಮಾಡಿ ಬದುಕಬಹುದು ಎಂಬುದನ್ನು ತಿಳಿದೆ. ಸಂಗೀತ, ನಾಟಕ, ಯಕ್ಷಗಾನ, ಸಾಹಿತ್ಯ ಆಸಕ್ತಿ ಬೆಳಸಿಕೊಂಡೆ. ದೊಡ್ಡಪ್ಪನ ಜೊತೆ ಓಡಾಡುತ್ತಿದ್ದೆ..ಅವರ ಬೈಕ್ಗೆ ನಾನು ಸಾರಥಿಯಾಗಿ...ಅಡಿಕೆ ವ್ಯಾಪರದ ಮಾಡುವಾಗಿನ ಸೂಕ್ಷ್ಮತೆ ಕಲೆತೆ...ಅಂತೂ ಒಂದು ವಷ೯ ಕಳೆದೆ ಹೋಯಿತು..ಮುಂದೆ ಕಾಲೇಜ್ ಅಭ್ಯಾಸಕ್ಕೆ ಉಡುಪಿಗೆ ಸೇರಿದೆ...ಅಲ್ಲಿನ ಕತೆ ಮುಂದೆ ಯಾವತ್ತಾದರೂ ಪುರುಸೊತ್ತು ಆದಾಗ ಬರೆಯುವೆ...
ಅಲ್ಲಿನ ಕತೆಗಳು ತುಂಬ ಮಜವಾಗಿದೆ...
ಹಳ್ಳಿಯಲ್ಲಿ ಬೆಳೆದು...ಇಲ್ಲಿನ ಕೆಲವಷ್ಟು ಮುಗ್ಧತೆಯನ್ನು ಹೊತ್ತು ನಗರಕ್ಕೆ ಸೇರಿದಾಗ ಆಗುವ ಅನುಭವ ಅದು...ಸಕತ್ ಹಾಟ್ ಆಗಿಯೂ ಅದಿರುವುದು ವಿಶೇಷ....

FEEDJIT Live Traffic Feed