Thursday, March 26, 2009

ವರುಣಾವತಾರ


ವರುಣ್‌ ಗಾಂಧಿ ಸಂಜಯ್‌ ಗಾಂಧಿ, ಮೇನಕಾ ಗಾಂಧಿಯ ಏಕೈಕ ಪುತ್ರ ಎನ್ನುವುದು ಗೊತ್ತು. ನೆಹರು ಕುಟುಂಬದ ಈ ಕುಡಿ ತೀರಾ ಭಿನ್ನ ಎನ್ನುವುದು ಗೊತ್ತಾಗಿದ್ದು ಮಾತ್ರ ಇತ್ತಿಚೇಗೆ.
‘ಹಿಂದೂಗಳ ಮೇಲೆ ಎತ್ತುವ ಕೈಗಳನ್ನು ಕತ್ತರಿಸಿ’, ‘ಮುಸ್ಲಿಂರನ್ನು ಹಿಡಿದು ಹಿಡಿದು ಸಂತಾನ ಹರಣ ಮಾಡಬೇಕು’ ಎನ್ನುವ ಮೂಲಕ ವಿವಾದದ ಸುಳಿಗೆ ವರುಣ್‌ ಸಿಕ್ಕಿದ ಮೇಲೆ. ಪ್ರವರ್ಧಮಾನಕ್ಕೆ ಬಂದರು ಎನ್ನಬಹುದು. ಅಲ್ಲಿಯವರೆಗೆ ಮೇನಕಾ ಗಾಂಧಿ ಮಗ ಅಂದಷ್ಟೇ ಗೊತ್ತಿತ್ತು. ಈಗ ಪ್ರಕರ ಹಿಂದೂ ವಾದಿ ಎನ್ನುವುದನ್ನು ವರಣ್‌ ಘಂಟಾ ಘೋಷವಾಗಿ ಸಾರಿದ್ದಾರೆ. ಅಪ್ಪನ ಮಗ ಎನಿಸಿಕೊಂಡಿದ್ದಾರೆ.
ವರುಣ್‌ ಗಾಂಧಿಯ ಮಾತು ಕೆಲವರಿಗೆ ಅಪಥ್ಯವಾಗಿದೆ. ವರುಣ್‌ ಅಕ್ಕ ಪ್ರಿಯಾಂಕಾ ಗಾಂಧಿ ತಮ್ಮನ ಮಾತು ಕೇಳಿ ದಿಗ್ಭ್ರಮೆಯಾಗಿದೆ. “ನನ್ನ ತಮ್ಮ ಭಗವದ್ಗೀತೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿಲಿ’ ಎಂದಿದ್ದಾರೆ. ವರುಣ್‌ ಗಾಂಧಿ ಮನಸ್ಸಿನ ಮಾತನ್ನು ಆಡಿದ್ದಾರೆ. ಸತ್ಯ ಹೇಳಿದ್ದಾರೆ. ಓಲೈಕೆಯ ಮಾತು ಅವರಿಗೆ ಬೇಡ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆದರೆ ನಾಯಕನಾಗಲು ಹೊರಟವ ಎಲ್ಲರೆದುರಿಗೆ ಈ ರೀತಿ ಮಾತನಾಡುವುದು ತಪ್ಪು. ಮನಸ್ಸಿನ ಮಾತು ಮನಸ್ಸಿನಲ್ಲಿಯೇ ಇರಲಿ ಎನ್ನುವುದು ಹಲವರ ಅಭಿಪ್ರಾಯ.
ಇದು ಒಂದು ಕಡೆ ಇರಲಿ, ಕಾಂಗ್ರೆಸ್‌ನವರಿಗೆ ಯಾಕೆ ಮೇನಕಾ ಗಾಂಧಿ ಅವರ ಕುಟುಂಬ ವರ್ಜ್ಯ. ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ವಡೇರಾ(ಗಾಂಧಿ) ಅವರನ್ನು ಇನ್ನು ಬೆಳೆಸುತ್ತಿದ್ದಾರೆ. ಅವರು ಹೇಳಿದ ತಾಳಕ್ಕೆ ಲಯ ತಪ್ಪಿದರೂ ಬಿಡದೆ ಕುಣಿಯುತ್ತಿದ್ದಾರೆ. ಇವರೆದುರು ಬೆನ್ನನ್ನು ಬಗ್ಗಿಸಿ ನೆತ್ತಿಯನ್ನು ನೆಲಕ್ಕೆ ತಾಗುವ ರೀತಿಯಲ್ಲಿ ನಿಂತು ಶರಣಾಗಿ ನಿಲ್ಲುತ್ತಿದ್ದಾರೆ. ಅಂತವರು ಇಂದಿರಾ ಗಾಂಧಿ ಎರಡನೆ ಮಗನ ಹೆಂಡತಿ, ಮಗ ಬೇಡವಾದರಲ್ಲ! ಒಂದು ರೀತಿಯ ವಿಷಾದ.
ಈ ರೀತಿಯ ಡೋಂಗಿ ವರ್ತನೆಗಿಂತ ವರುಣ್‌ ಗಾಂಧಿಯ ಮಾತೇ ಎಷ್ಟೋ ವಾಸಿ ಎನಿಸುತ್ತದೆ.
ರಾಹುಲ್‌ ಮೂರು ತಿಂಗಳಿಗೆ ತಂದೆಯನ್ನು ಕಳೆದು ಕೊಂಡು ಉತ್ತಮ ಶಿಕ್ಷಣವನ್ನು ತಾಯಿಕೊಡಿಸಿದರು. ಹಿಂದೂ ಮನಸ್ಥಿತಿಯಲ್ಲೇ ಇರುವುದು ಸೋಜಿಗವೇ ಸರಿ. ಜಾತ್ಯಾತೀತ ತತ್ವಗಳಿಗೆ ಒತ್ತು ನೀಡುವ ನೆಹರೂ ಕುಟುಂಬದವನೇ ಇವನು ಎನ್ನುವಷ್ಟು ಆಶ್ಚರ್ಯ ವರುಣ್‌ ನೋಡಿದರೆ ಆಗುತ್ತದೆ.
ಸಂಜಯ್‌ ಗಾಂಧಿ 1974-76ರ ವರೆಗೆ ವರ್ತಿಸಿದ ರೀತಿ ಇಂದಿರಾಗಾಂಧಿಗೂ ತಲೆ ನೋವಾಗಿತ್ತಂತೆ. ಅವರೇ ಒಂದು ಹಂತದಲ್ಲಿ ಸಂಜಯ್‌ ಗಾಂಧಿಯನ್ನು ದೂರವಿಟ್ಟಾಗ ನಾವು ದೂರ ಇಡುವುದು ಎನು ಮಾಹಾ? ಎನ್ನುವ ಆಲೋಚನೆಯೂ ಕಾಂಗ್ರೆಸ್‌ ನಾಯಕರಿಗೆ ಬಂದರೆ ತಪ್ಪಲ್ಲ.
ವರುಣ್‌ ವಿಚಾರಕ್ಕೆ ಬಂದಾಗ ತಂದೆಯಂತೆ ಮಗನು ಸಹ ಮುಸ್ಲಿಂರ ವಿರುದ್ಧ ಮಾತನಾಡಿದ್ದಾರೆ. ಋಣಾತ್ಮಕ ಪ್ರಚಾರವನ್ನು ಪಡೆದು ಕೊಂಡಿದ್ದಾರೆ. ಇಲ್ಲಿ ಕೆಲವು ಅಂಶಗಳನ್ನು ಈ ರೀತಿಯಲ್ಲಿ ವಿವೇಚಿಸಬಹುದೇನೋ ... . . . . . .
· ಹಿಂಸಾತ್ಮಕ ಮಾತನ್ನು ವರುಣ್‌ ಸಾರ್ವಜನಿಕವಾಗಿ ಆಡಿದ್ದು ತಪ್ಪು.
· ಕ್ರೂರತೆಯನ್ನು ಯಾರು ಒಪ್ಪುವುದಿಲ್ಲ.
· ಸಿನೆಮಾದಲ್ಲಿ ಪ್ರಾಣಿ ಹಿಂಸೆ ಮಾಡಿದರೂ ಬೊಬ್ಬೆ ಹಾಕುವ ಮೇನಕಾ ಗಾಂಧಿ ವರುಣ್‌ ಮಾತನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?
· ವರುಣ್‌ಗೆ ಇನ್ನು ಚಿಕ್ಕ ವಯಸ್ಸು.
· ರಾಹುಲ್‌ ಗಾಂಧಿಯನ್ನು ಇತರರು ಬೆಳೆಸುತ್ತಿರುವುದು ಸಹೋದರ ವರುಣ್‌ಗೆ ಕಷ್ಟವಾಗಿರಬಹುದು.
· ನನ್ನನ್ನು ನಾನೇ ಬೆಳಸಿಕೊಳ್ಳಬೇಕು ಎನ್ನುವ ಆಲೋಚನೆ ವರುಣ್‌ಗೆ ಬಂದಿರಬಹುದು.
· ವರುಣ್‌ ಮಾತಾಡಿರುವುದು ಚುನಾವಣೆಗೆ ನಿಲ್ಲಲು ಅನರ್ಹ ಎನ್ನುವಷ್ಟು ತಪ್ಪಿನ ಮಾತಲ್ಲ.
· ಚುನಾವಣಾ ಆಯೋಗದ ಸಲಹೆ ಅಗತ್ಯವಿರಲಿಲ್ಲ.
· ಮುಲಾಯಂ ಸಿಂಗ್‌ ಚುನಾವಣಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದರೂ ಚುನಾವಣೆಗೆ ನಿಲ್ಲ ಬೇಡಿ ಎನ್ನುವ ಸಲಹೆ ನೀಡಲಿಲ್ಲ.
· ಸಂಜಯ್‌ ದತ್ತ್‌ ಟಾಡಾ ಕಾಯ್ದೆಯಡಿಯಲ್ಲಿ ಬಂಧಿತನಾದರೂ ಅವನಿಗೆ ಚುನಾವಣೆಯಲ್ಲಿ ನಿಲ್ಲಲೂ ಅವಕಾಶ.
· ಶೀಬು ಸೋರೆನ್‌ ಚುನಾವಣೆಗೆ ನಿಲ್ಲಬಹುದಾರೇ ವರುಣ್‌ ನಿಂತರೆ ಏನೂ ತಪ್ಪಿಲ್ಲ.
· ಕ್ರಿಮಿನಲ್‌ಗಳನ್ನು ಸುಮ್ಮನೆ ಬೀಡುವವರು. ವರುಣ್‌ ಮಾತು ತಪ್ಪು ಎನ್ನುವುದು ಎಷ್ಟು ಸರಿ?
· ಹವಾಲಾ, ಬೋಫೋರ್ಸ, ಭ್ರಷ್ಟಾಚಾರ ಎಲ್ಲದಕ್ಕೂ ಅವಕಾಶ ನೀಡಿ, ಮೇಲ್ವರ್ಗದವರೇ ಹೆಚ್ಚಿರುವ ಕಾಂಗ್ರೆಸಿಗರಿಗೆ ವರುಣ್‌ ಮಾತು ತಪ್ಪಾಗಿ ಕಾಣುತ್ತಿದೆ.
ಒಟ್ಟಾರೆ ವರುಣ್‌ ಪ್ರಕರಣವನ್ನು ಗಮನಿಸಿದಾಗ ಮಾಡಬಾರದ ತಪ್ಪನ್ನು ವರುಣ್‌ ಮಾತಾಡಲಿಲ್ಲ. ಉದ್ರೇಕವಾಗಿ ಭಾಷಣ ಮಾಡುತ್ತಿರುವಾಗ ಎಲ್ಲಿಂದಲೋ ಈ ಮಾತುಗಳು ನುಸುಳಿರಬಹುದು. ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ ಅನ್ನಿಸುತ್ತದೆ. ಆದರೂ ವರುಣ್‌ ಮಾತನಾಡಿರುವುದು ತಪ್ಪು ಎನ್ನುವುದು ಒಂದು ಕಡೆಯಾದರೆ, ಒಳಗಡೆಯಿಂದಲೇ ಬತ್ತಿ ಇಡುವ ಬದಲು ವರುಣ್‌ ಮಾತು ಎಷ್ಟೋ ಒಳೆಯದು ಎನ್ನುವ ವಾದವು ಸರಿ ಎನ್ನಬಹುದಲ್ಲವೇ?

FEEDJIT Live Traffic Feed